ನಮಸ್ಕಾರ ನಮಸ್ಕಾರ ನಮಸ್ಕಾರ!! ಆಶ್ಚರ್ಯ ಆಯ್ತಾ ಯಾಕಪ್ಪ ಇಷ್ಟು ನಮಸ್ಕಾರ ಅಂತ.. ಏನಿಲ್ಲ ತುಂಬ ದಿವ್ಸ ಆಯ್ತಲ್ವ ಬರ್ದು ಅದಕ್ಕೆ ಕನ್ನಡಿಗರ ಮೇಲೆ ಸ್ವಲ್ಪ ಜಾಸ್ತಿ ಲವ್ ಬಂತು. ಓಕೆ ಬಿಡ್ರಿ ಮತ್ತೇನು ವಿಷಯ ಆರಾಮ ಎಲ್ಲ..
ಏನಿಲ್ಲ ಮೊನ್ನೆ ಟಿವಿ ನೋಡ್ತಾ ಇದ್ದೆ ನಮ್ಮ ದೇಶದ ಪ್ರಧಾನಿ ಸಿಂಗಣ್ಣ ಏನೋ ಹೇಳ್ತಾ ಇದ್ರು..ಅದೇನೋ ಈಜಿಪ್ಟ್ ಹೋಗಿ ಏನೋ ಹಲ್ಕಟ್ ಕೆಲಸ ಮಾಡ್ಕೊಂಡು ಬಂದ್ರಲ್ಲ , ಅದ್ಯಾವ್ದೋ ಮೆಪಲ್ಲಿ ಇರದ ಬಲುಚಿಸ್ತಾನ್ ಬಗ್ಗೆ ಏನೋ ಡೀಲ್ ಮಾಡವ್ನೆ ನನ್ಮಗ.. ಏನ್ ತಗೊಂಡು ಹೊಡ್ಕೊಳೋಣ ಹೇಳ್ರಿಪ್ಪ , ಪ್ರಧಾನ ಮಂತ್ರಿ ಅಲ್ಲರಿ ಅವ್ನು ನಿಧಾನ ಮಂತ್ರಿ..ಏನಂತಿರ
ಕೆಲವೊಮ್ಮೆ ಬೇಜಾರ ಆಗುತ್ತೆ ಯಾಕ ನಾವ್ ಹಿಗಿದಿವಿ ಅಂತ. ನಮ್ಮಲ್ಲಿ ತಾಕತ್ ಇಲ್ವಾ talent ಇಲ್ವಾ ಅದ್ರು ನಾವ್ ಯಾಕೆ ಇವರಿಗೆಲ್ಲ ಹೆದರಬೇಕು , ಇದಕ್ಕೆ ಏನ್ ಅಂತಾರೆ ಗೊತ್ತ "learned helplessness" ಅಂತಾರೆ , ನಮ್ಮ ಕೈಲಿ ಏನು ಆಗಲ್ಲ ಅಂತ ನಮ್ ಮನಸಲ್ಲಿ ಎಲ್ಲೋ ಗಟ್ಟಿಯಾಗಿ ಕುತ್ಬಿಟ್ಟಿದೆ , ಅದಕ್ಕೆ ನಾವ್ ಈರೀತಿ ಆಡೋದು . ನಮಗೆ ನೆಹರು ಸಾಹೇಬರು ಕೊಟ್ಟ ಮಹಾನ್ ಬಿರಿದು ಇದೆಅಲ್ವ " ಶಾಂತಿ ಪ್ರಿಯ ದೇಶ " ಅಂತ ಅದಕ್ಕೆ ನಾವೆಲ್ಲ ಶಾಂತಿ ಪ್ರಿಯರಾಗಿದಿವಿ. ತುಂಬ ಶಾಂತಿ ಪ್ರಿಯರಿಗೆ ಜಗತ್ತು "ಚಕ್ಕ" ಎಂಬ ಹಣಪಟ್ಟಿ ಹಾಕುತ್ತೆ ಕಣ್ರೀ ಅಲ್ವ.
ಈ ಪುಡಾರಿಗಳು ಮಾಡೋ ಹಲ್ಕಾ ಕೆಲ್ಸಕ್ಕೆ ನಮ್ಮ ಭಾರತ ದೇಶ ತುಂಬ ಬೆಲೆ ತೆತ್ಬೇಕಾಗುತ್ತೆ ನೋಡ್ತಾ ಇರಿ. ಪಾಪ ಅಲ್ಲಿ ಎಲ್ಲೊ ಇಂಡೋ ಪಾಕ್ ಸರಹದ್ದಿನಲ್ಲಿ ಜೀವ ಕೈಲಿ ಹಿಡ್ಕೊಂಡು ದೇಶಕ್ಕಾಗಿ, ನಮ್ಮೆಲ್ಲರ ಸುರಕ್ಷತೆಗಾಗಿ ಬಂದೂಕು ಹಿಡ್ಕೊಂಡು ಕೂತಿದಾನಲ್ವ ಅವ್ನಿಗೆ ನಾವ್ ಕೊಡೋದು ಇಷ್ಟೇ "ಪರಮ ವೀರ ಚಕ್ರ ". ಒಬ್ಬ ಸೈನಿಕನ ಜೀವನ ಅರ್ಥ ಮಾಡ್ಕೊಳೋ capacity ನಮ್ಮಂತ ಸಾಧಾರಣ ವ್ಯಕ್ತಿಗಳಿಗೆ ಇಲ್ಲ . ನಮ್ಮ ದೇಶದ ಹುಚ್ಚು ಜನ ಶಾರುಖ್ ಖಾನ್ ಗೆ ಅಮೇರಿಕಾ ೨ ಘಂಟೆ question ಮಾಡಿದಕ್ಕೆ ರೊಚ್ಚಿಗೆದ್ದು ಬಿಟ್ರು ಅದೇ ಜನ ನಮ್ಮ ಮಾಜಿ ರಕ್ಷಣಾ ಮಂತ್ರಿ ಮಾನ್ಯ george fernandes ಗೆ ಬಟ್ಟೆ ಬಿಚ್ಚಿ
ಅಮೇರಿಕಾ ಪರೀಕ್ಷೆ ಮಾಡ್ದಾಗ ಎಲ್ಲಿದ್ರು, ಹಾಳಾದ ಕೆಟ್ಟು ಕೆರ ಹಿಡಿದ ಈ ಮೀಡಿಯಾ ಎಲ್ಲಿತ್ತು ಸ್ವಲ್ಪ ೨ ಲೈನ್ ಬರೆದು ಬಿಟ್ಬಿಟ್ರು .
ನಮಗೆ ನಂ ದೇಶದ ಬಗ್ಗೆ ಅಭಿಮಾನ ಇಲ್ಲಾರಿ ಅದಕ್ಕೆ ನಮ್ಮ ಭಾರತ third world country ಅನ್ಸಿಕೊಂಡಿದೆ.
ಮಂಗಳವಾರ, ಆಗಸ್ಟ್ 18, 2009
ಭಾನುವಾರ, ಜೂನ್ 14, 2009
ನೆನಪಿನ ಮರುಭೂಮಿ..
ನನ್ನ ಮೊಟ್ಟ ಮೊದಲ ಕನ್ನಡ ಬ್ಲಾಗ್ಗೆ ಸ್ವಾಗತ...
ನೋಡ್ರಪ್ಪ ನನಿಗೆ ಕನ್ನಡ ಸ್ವಲ್ಪ ಕಷ್ಟ ಕೊಡುತ್ತೆ..ಮಾತಾಡಕ್ಕೆ ಹೇಳಿ ಎಲ್ಲ ತರದ ಕನ್ನಡ ಮಾತಾಡ್ತೀನಿ ಆದ್ರೆ ಬರಿಯಕ್ಕೆ ಕೂತರೆ ಎಲ್ಲ ಬ್ಲಾಂಕ್ .. ನನ್ನ ಗೆಳೆಯರಾದ ಸುನಿಲ್ (ಅನಿಕೇತನ) ಮತ್ತು ವೀರೇಶ್ ಹಿರೆಮಟ್ ಪಾಟೀಲ್ ಅವರ ಬ್ಲಾಗ್ ನೋಡಿ ಮೈ ಎಲ್ಲ ರಕ್ತ ಬರೋವರ್ಗು ಕೆರ್ಕೊಂಡು ಸಾಯೋಹಾಗೆ ಅದಮೇಲೆ ಅನ್ಕೊಂಡೆ ನಾನು ಕನ್ನಡದಲ್ಲಿ ಬ್ಲಾಗ್ ಬರೀಬೇಕು ಅಂತಾ.. ಬರಿಯಕ್ಕೆ ಅಲ್ಲ ಸಾರೀ ಟೈಪ್ ಮಾಡೋಕೆ ಕುತಾಗಲೇ ಗೊತ್ತಾಗಿದ್ದು ಕಣ್ರೀ ಕನ್ನಡ ಎಷ್ಟು ಕಷ್ಟ ಅಂತಾ.. ಬಿಡಲ್ಲ ರೀ ನಾನು ಎಸ್ಟೆ ಕಷ್ಟ ಆಗಲಿ ಬರೀತೀನಿ.. ಬರದು ನಿಮ್ಮನ್ನು ನಗಿಸ್ತಿನಿ.. ಅಬ್ಬ ಇಷ್ಟು ಬರಿಯುವವರೆಗೂ ನೀರಿಳಿತು ಕಣ್ರೀ.. ಒಂದು ಘಂಟೆ ಇಂದ ಬರಿತ ಇದೀನಿ...
ಕನ್ನಡ ಎಷ್ಟು ಚಂದ ಅಲ್ವ.. ನನಿಗೆ ಕನ್ನಡದ ಸವಿ ಗೊತ್ತಾಗಿದ್ದು ನಾನು ಈ ದುಬೈ ಎಂಬ ಅರಬರ ನಾಡಿಗೆ ಬಂದಾಗ..
ಸಾವಿರಾರು ಕನಸು ಕಂಡು ತಾಯ್ನಾಡನ್ನು ನನ್ನವರನ್ನು ನನ್ನ ನೆಚ್ಚಿನ ಗೆಳೆಯರನ್ನು ಬಿಟ್ಟು ಬಂದ ನನಿಗೆ ಇಲ್ಲಿ ಸಿಕ್ಕಿದ್ದು ಬೊಗಸೆ ತುಂಬ ನೀರಾಷೆ.. ಯಾಕೆ ಹೇಳಿ ಯಾಕಂದ್ರೆ ಇಲ್ಲಿ ನೀರು ತುಂಬ ಕಾಸ್ಟ್ಲಿ ಅದಕ್ಕೆ ನೀರ್ -ಆಶೆ ಆಗಿದ್ದು..
ದುಡ್ಡು ಕಣ್ರೀ ದುಡ್ಡು..ಎಲ್ಲರಿಗು ಬೇಕಾದ ಈ ದುಡ್ಡು ನನ್ನನು ಎರಡುವರೆ ಸಾವಿರ ಮೈಲು ದೂರ ಬರೋಹಾಗೆ ಮಾಡ್ತು..
ನಾನು ಪಟ್ಟ ಕಷ್ಟ..ನನ್ನು ಆ ಜೀವಕ್ಕಿಂತ ಹೆಚ್ಚು ಪ್ರೀತಿಯ ಯಮಹ ಬೈಕ್ ರೀಪೈರ್ ಮಾಡೋಕೆ ಹಣ ಇಲ್ದೆ ನಾನು ಕಷ್ಟ ಪಟ್ಟ ಆ ದಿನಗಳು ಇನ್ನು ನನ್ನು ನೆನಪಿಂದ ಮಾಸಿಲ್ಲ..
ಆ ನನ್ನ ಗೆಳೆಯರಾದ ಪ್ರಶಾಂತ್ ಮತ್ತು ಕಿಟ್ಟಿಯ ಪ್ರೀತಿ ಮತ್ತು ಬೈಗುಳ ಇನ್ನು ನೆನಪಾಗುತ್ತೆ.. ಒಬ್ಬನೇ ಇಲ್ಲಿ ಜುಮ್ಮೈರ ಬೀಚ್ ಅಲ್ಲಿ ಕೂತರೆ ಹಳೆ ನೆನಪು ಕಣ್ಣಲ್ಲಿ ಅಲೆಯಂತೆ ಉಕ್ಕಿ ಬರುತ್ತೆ..ಎಷ್ಟು ಸಲ ಆ ಅರಬರ ಸಮುದ್ರದಲ್ಲಿ ನನ್ನ ಕನ್ನಡದ ಕಣ್ಣಿರು ಬೇರೆತಿದೆಯೋ ಗೊತ್ತಿಲ್ಲ.. ಆದ್ರೆ ಜೀವನ ಹೀಗೆ ಅಂತಾ ಒಂಟಿ ಮನಸಿಗೆ ಸಮಾಧಾನ ಹೇಳ್ತಾ ಇದೀನಿ.
ಎಸ್ಟೋ ಸಲ ಅನ್ಕೊಂಡಿದಿನಿ ನೆನಪು ಅನ್ನೋದು ಮರಳುಗಾಡು. ಒಮ್ಮೆ ಕಳೆದುಹೋದ್ರೆ ದಾರಿ ಸಿಗೋದು ತುಂಬ ಕಷ್ಟ.. ಅಲ್ವ ??
ನೋಡ್ರಪ್ಪ ನನಿಗೆ ಕನ್ನಡ ಸ್ವಲ್ಪ ಕಷ್ಟ ಕೊಡುತ್ತೆ..ಮಾತಾಡಕ್ಕೆ ಹೇಳಿ ಎಲ್ಲ ತರದ ಕನ್ನಡ ಮಾತಾಡ್ತೀನಿ ಆದ್ರೆ ಬರಿಯಕ್ಕೆ ಕೂತರೆ ಎಲ್ಲ ಬ್ಲಾಂಕ್ .. ನನ್ನ ಗೆಳೆಯರಾದ ಸುನಿಲ್ (ಅನಿಕೇತನ) ಮತ್ತು ವೀರೇಶ್ ಹಿರೆಮಟ್ ಪಾಟೀಲ್ ಅವರ ಬ್ಲಾಗ್ ನೋಡಿ ಮೈ ಎಲ್ಲ ರಕ್ತ ಬರೋವರ್ಗು ಕೆರ್ಕೊಂಡು ಸಾಯೋಹಾಗೆ ಅದಮೇಲೆ ಅನ್ಕೊಂಡೆ ನಾನು ಕನ್ನಡದಲ್ಲಿ ಬ್ಲಾಗ್ ಬರೀಬೇಕು ಅಂತಾ.. ಬರಿಯಕ್ಕೆ ಅಲ್ಲ ಸಾರೀ ಟೈಪ್ ಮಾಡೋಕೆ ಕುತಾಗಲೇ ಗೊತ್ತಾಗಿದ್ದು ಕಣ್ರೀ ಕನ್ನಡ ಎಷ್ಟು ಕಷ್ಟ ಅಂತಾ.. ಬಿಡಲ್ಲ ರೀ ನಾನು ಎಸ್ಟೆ ಕಷ್ಟ ಆಗಲಿ ಬರೀತೀನಿ.. ಬರದು ನಿಮ್ಮನ್ನು ನಗಿಸ್ತಿನಿ.. ಅಬ್ಬ ಇಷ್ಟು ಬರಿಯುವವರೆಗೂ ನೀರಿಳಿತು ಕಣ್ರೀ.. ಒಂದು ಘಂಟೆ ಇಂದ ಬರಿತ ಇದೀನಿ...
ಕನ್ನಡ ಎಷ್ಟು ಚಂದ ಅಲ್ವ.. ನನಿಗೆ ಕನ್ನಡದ ಸವಿ ಗೊತ್ತಾಗಿದ್ದು ನಾನು ಈ ದುಬೈ ಎಂಬ ಅರಬರ ನಾಡಿಗೆ ಬಂದಾಗ..
ಸಾವಿರಾರು ಕನಸು ಕಂಡು ತಾಯ್ನಾಡನ್ನು ನನ್ನವರನ್ನು ನನ್ನ ನೆಚ್ಚಿನ ಗೆಳೆಯರನ್ನು ಬಿಟ್ಟು ಬಂದ ನನಿಗೆ ಇಲ್ಲಿ ಸಿಕ್ಕಿದ್ದು ಬೊಗಸೆ ತುಂಬ ನೀರಾಷೆ.. ಯಾಕೆ ಹೇಳಿ ಯಾಕಂದ್ರೆ ಇಲ್ಲಿ ನೀರು ತುಂಬ ಕಾಸ್ಟ್ಲಿ ಅದಕ್ಕೆ ನೀರ್ -ಆಶೆ ಆಗಿದ್ದು..
ದುಡ್ಡು ಕಣ್ರೀ ದುಡ್ಡು..ಎಲ್ಲರಿಗು ಬೇಕಾದ ಈ ದುಡ್ಡು ನನ್ನನು ಎರಡುವರೆ ಸಾವಿರ ಮೈಲು ದೂರ ಬರೋಹಾಗೆ ಮಾಡ್ತು..
ನಾನು ಪಟ್ಟ ಕಷ್ಟ..ನನ್ನು ಆ ಜೀವಕ್ಕಿಂತ ಹೆಚ್ಚು ಪ್ರೀತಿಯ ಯಮಹ ಬೈಕ್ ರೀಪೈರ್ ಮಾಡೋಕೆ ಹಣ ಇಲ್ದೆ ನಾನು ಕಷ್ಟ ಪಟ್ಟ ಆ ದಿನಗಳು ಇನ್ನು ನನ್ನು ನೆನಪಿಂದ ಮಾಸಿಲ್ಲ..
ಆ ನನ್ನ ಗೆಳೆಯರಾದ ಪ್ರಶಾಂತ್ ಮತ್ತು ಕಿಟ್ಟಿಯ ಪ್ರೀತಿ ಮತ್ತು ಬೈಗುಳ ಇನ್ನು ನೆನಪಾಗುತ್ತೆ.. ಒಬ್ಬನೇ ಇಲ್ಲಿ ಜುಮ್ಮೈರ ಬೀಚ್ ಅಲ್ಲಿ ಕೂತರೆ ಹಳೆ ನೆನಪು ಕಣ್ಣಲ್ಲಿ ಅಲೆಯಂತೆ ಉಕ್ಕಿ ಬರುತ್ತೆ..ಎಷ್ಟು ಸಲ ಆ ಅರಬರ ಸಮುದ್ರದಲ್ಲಿ ನನ್ನ ಕನ್ನಡದ ಕಣ್ಣಿರು ಬೇರೆತಿದೆಯೋ ಗೊತ್ತಿಲ್ಲ.. ಆದ್ರೆ ಜೀವನ ಹೀಗೆ ಅಂತಾ ಒಂಟಿ ಮನಸಿಗೆ ಸಮಾಧಾನ ಹೇಳ್ತಾ ಇದೀನಿ.
ಎಸ್ಟೋ ಸಲ ಅನ್ಕೊಂಡಿದಿನಿ ನೆನಪು ಅನ್ನೋದು ಮರಳುಗಾಡು. ಒಮ್ಮೆ ಕಳೆದುಹೋದ್ರೆ ದಾರಿ ಸಿಗೋದು ತುಂಬ ಕಷ್ಟ.. ಅಲ್ವ ??
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
